FLASH NEWS

FLASH NEWS:**************ನಮ್ಮ ಶಾಲೆಯ ಬ್ಲೋಗ್ ನ್ನು ಸಂದರ್ಶಿಸಿರುವುದಕ್ಕೆ ಧನ್ಯವಾದಗಳು.ಕ್ಷಮಿಸಿ ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ನಮ್ಮ ಶಾಲೆಯ ಬ್ಲೋಗ್ ಇನ್ನು ಮುಂದೆ http://11018ghsspaivalikenagar.blogspot.in/ ಎಂಬ ವಿಳಾಸದಲ್ಲಿ ಲಭ್ಯವಿರುವುದು. ಸಂದರ್ಶಕರ ಸಹಕಾರವನ್ನು ನಾವು ಬಯಸುತ್ತೇವೆ**************നമ്മുടെ ബ്ലോഗ് സംദര്ശിച്ചുകൊണ്ടിരുന്നതിന് നന്തി. ചില കാരണങ്കളാല് നമ്മുടെ സ്കൂളിന്റെ ബ്ലോഗ് ഇനിമുതല് http://11018ghsspaivalikenagar.blogspot.in/ എന്ന അഡ്രസ്സില് ലഭ്യമാകും. സംദര്ശകരുടെ സഹകരണം അഭ്യര്ഥിക്കുന്നു***********Thank you for visiting our blog. Due to some technical problems our continued service will be availabe in url http://11018ghsspaivalikenagar.blogspot.in/ we expecting your co operation

Thursday, July 31, 2014


ಚಾಂದ್ರಯಾನ ದಿನ







ಪೈವಳಿಕೆನಗರ: ಚಾಂದ್ರ ದಿನವನ್ನು ಪೈವಳಿಕೆನಗರ ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸರವರು ಉದ್ಘಾಟಿಸಿದರು. ಕೃಷ್ಣಮೂರ್ತಿ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ಮಾಸ್ಟರ್ ಶುಭಹಾರೈಸಿದರು. ಶ್ರೀಧರ ಭಟ್ ಕಾರ್ಯಕ್ರಮದ ಕುರಿತು ವಿವರಿಸಿದರು. ಶಿಕ್ಷಕರಾದ ಪ್ರಶಾಂತ್ ಕುಮಾರ್ ಅಮ್ಮೇರಿ, ಅಬ್ದುಲ್ ಕರೀಂ .ಪಿ.ಕೆ. ರೇಖಾ ಟೀಚರ್ ಉಪಸ್ಥಿತರಿದ್ದರು. ಯುಪಿ ಸಭಾಂಗಣದಲ್ಲಿ ಚಾರ್ಟು ಪ್ರದರ್ಶನ ಏರ್ಪಡಿಸಲಾಗಿತ್ತು. ಚಾಂದ್ರದಿನದ ಬಗ್ಗೆ ರಸಪ್ರಶ್ನೆ ಏರ್ಪಡಿಸಲಾಗಿತ್ತು. ಯುಪಿ ವಿಭಾಗದಲ್ಲಿ 7ನೇ ತರಗತಿಯ ಪ್ರಜ್ಞಾ, ಹೈಸ್ಕೂಲ್ ವಿಭಾಗದಲ್ಲಿ 10ನೇ ತರಗತಿಯ ನಿತಿನ್ ಕೃಷ್ಣ ಪ್ರಥಮ ಸ್ಥಾನಗಳಿಸಿದರು.7ನೇ ತರಗತಿಯ ಧ್ವಾನಿಷ್ ಸ್ವಾಗತಿಸಿ 7ನೇ ತರಗತಿಯ ಅಕ್ಷತಾ ವಂದಿಸಿದರು. 7ನೇ ತರಗತಿಯ ಕಾರ್ತಿಕ್ ಕಾರ್ಯಕ್ರಮ ನಡೆಸಿಕೊಟ್ಟರು.

ವಿಶ್ವ ಜನಸಂಖ್ಯಾ ದಿನ





ಜುಲೈ 11ರಂದು ಪೈವಳಿಕೆನಗರ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸರವರು ಉದ್ಘಾಟನೆ ಮಾಡುವುದರೊಂದಿಗೆ ಸಭೆ ಆರಂಭವಾಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಲೋರೆನ್ಸ್ ಡಿಸೋಝರವರು ಎಲ್ಲಾ ಕ್ಲಬ್ ಗಳ ಉದ್ಘಾಟನೆಯನ್ನು ವಿದ್ಯುಕ್ತವಾಗಿ ನೆರವೇರಿಸಿದರು. ಶ್ರೀ ಕೃಷ್ಣಮೂರ್ತಿ ಸರ್ ಶುಭಾಶಂಸನೆಗೈದರು.ಸಭೆಗೆ 6ರಿಂದ 8ನೇ ತರಗತಿಯ ಎಲ್ಲಾ ಕ್ಲಬ್ ಗಳ ಸದಸ್ಯರು ಭಾಗವಹಿಸಿದ್ದರು. ಮಧ್ಯಾಹ್ನ ಜನಸಂಖ್ಯೆಯ ಅಂಕಿ ಅಂಶಗಳ ಬಗ್ಗೆ ಡಿವಿಡಿ ಪ್ರದರ್ಶನ ಮತ್ತು ಚರ್ಚೆ ನಡೆಯಿತು. ಮಧ್ಯಾಹ್ನ ಭೋಜನ ವಿರಾಮದ ನಂತರ 2ಗಂಟೆಗೆ ಸರಿಯಾಗಿ ರಸಪ್ರಶ್ನೆ ನಡೆಯಿತು.ನಂತರ ಜನಗಣತಿಯ ಅಂಕಿ ಅಂಶಗಳ ಚರ್ಚೆ ನಡೆಯಿತು. ಅಪರಾಹ್ನ 3ಗಂಟೆಗೆ ಸರಿಯಾಗಿ ಪ್ರೋಜೆಕ್ಟ್ ಇನ್ ರಿಲೇಶನ್ ಟು ಸೆನ್ ಸಸ್ 2011 ಎಂಬ ಕಾರ್ಯಕ್ರಮ ಜರಗಿತು. ಜನಸಂಖ್ಯಾ ರಸಪ್ರಶ್ನೆಯಲ್ಲಿ 7 ಎ ತರಗತಿಯ ಪ್ರಜ್ಞಾ ಪ್ರಥಮ ಸ್ಥಾನ ಹಾಗೂ 7ಸಿ ಯ ಧ್ವಾನಿಶ್ ದ್ವಿತೀಯ ಸ್ಥಾನ ಗಳಿಸಿದರು. ಎಲ್ಲಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಶಾಂತ್ ಸರ್ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಸಮಾಜ ವಿಜ್ಞಾನದ ಶ್ಯಾಮಲಾ ಟೀಚರ್ ಜನಸಂಖ್ಯೆಯ ಬಗ್ಗೆ ಸ್ವರಚಿತ ಕವನವನ್ನು ಹಾಡಿ ವಂದನಾರ್ಪಣೆಗೈದರು. ಶ್ರೀಧರ ಮಾಸ್ಟರ್ ನಿರೂಪಿಸಿದರು.

No comments: